Tuesday, August 3, 2010

ಬದುಕಿನ ಅರಿವು ಮತ್ತು ಪರಿಸರ ಪ್ರಜ್ಞೆಯೇ ಸಾಹಿತ್ಯಕ್ಕೆ ಕಾರಣ- ಅಕ್ಬರ್ ಕಾಲಿಮಿರ್ಚಿ



ಕೊಪ್ಪಳ : ಬದುಕಿನ ಅನುಭವ,ಅರಿವು,ಪರಿಸರ ,ಪ್ರಕೃತಿಯೆಡೆಗಿನ ಪ್ರಜ್ಞೆಯೇ ಸಾಹಿತ್ಯಕ್ಕೆ ಕಾರಣವಾಗುತ್ತದೆ ಎಂದು ಕವಿ ಅಕ್ಬರ್ ಕಾಲಿಮಿರ್ಚಿ ಹೇಳಿದರು. ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸಾಹಿತಿಗಳಿಗೆ ಕಳಂಕವಿದೆಯೇ ಹೊರತು ಸಾಹಿತ್ಯಕ್ಕೆ ಯಾವತ್ತೂ ಕಳಂಕವಿಲ್ಲ. ಬದುಕಿಗೆ ದಾರಿ ದೀಪವಾಗುವ ಕಾವ್ಯ ರಚನೆಯಾಗಬೇಕು ಎಂದರು. ಕವಿಸಮಯದಲ್ಲಿ ಭಾಗವಹಿಸಿದ್ದ ಕವಿಗಳ ದಂಡನ್ನು ಕಂಡು ಹರ್ಷ ವ್ಯಕ್ತಪಡಿಸಿದ ಕಾಲಿಮಿರ್ಚಿ ೨೮ ಕವಿಗಳು ಇಂದು ಕವನ ವಾಚನ ಮಾಡಿದ್ದಾರೆ. ಎಲ್ಲಾ ಕವಿಗಳನ್ನು ನೋಡುವ ಭಾಗ್ಯ ನೀಡಿದ ಕವಿಸಮಯ ನಿಜವಾಗಿಯೂ ಕವಿದರ್ಶನ ಕಾರ್‍ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ಕವಿಸಮಯ ಕಾರ್‍ಯಕ್ರಮದಲ್ಲಿ ದಾಖಲೆ ಸಂಖ್ಯೆಯಲ್ಲಿ ಕವಿಗಳು ಮತ್ತು ಆಸಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ೨೮ ಕವಿಗಳು ತಮ್ಮ ಕವನ ವಾಚನ ಮಾಡಿದರು. ಪ್ರತಿಕವಿಯೂ ತಮ್ಮ ಕವಿತೆಯ ಹುಟ್ಟಿನ ಬಗ್ಗೆ ಹೇಳಿ ತಮ್ಮ ಕವನ ವಾಚನ ಮಾಡಿದರು. ಶಾಂತಾದೇವಿ ಹಿರೇಮಠ-ಮರಕೋತಿಯಾಟ,ವಿಮಲಾ ಇನಾಂದಾರ ಅಳವಂಡಿ- ಪ್ರತಿಭಟನೆ, ವಾಗೀಶ ಪಾಟೀಲ್- ಮೌನ್, ಶಿ.ಕಾ.ಬಡಿಗೇರ- ಚುಟುಕುಗಳು, ಮಹಾಂತೇಶ ಮಲ್ಲನಗೌಡರ -ನಾಕ ನರಕ, ಅಕ್ಬರ್ ಕಾಲಿಮಿರ್ಚಿ- ಸೂರ್‍ಯನಿಗೆ, ಎ.ಪಿ.ಅಂಗಡಿ-ಇರಬೇಕು, ವಿರೇಶ ಹುಲ್ಲೂರ- ಪ್ರಕೃತಿಯ ಮುದ್ದಿನ ಕೂಸು, ಹನ್ಮಂತಪ್ಪ ಬಾರಕೇರ- ಅಮ್ಮ, ಜಿ.ಎಸ್.ಬಾರಕೇರ- ಹೆಂಡತಿ ತವರಿಗೆ ಹೋದಾಗ, ಜಡೆಯಪ್ಪ ಎನ್.-ನಾವೇ ಇಲ್ಲದ ನೆಲದಲ್ಲಿ, ವೀರಣ್ಣ ಹುರಕಡ್ಲಿ-ಸುತ್ತೋಣ ಬಾರಾ, ಶ್ರೀನಿವಾಸ ಚಿತ್ರಗಾರ- ಚುಟುಕುಗಳು, ಶಿವಪ್ಪ ಶೆಟ್ಟರ್- ದೇಶಭಕ್ತಿಗೀತೆ, ಮಹೇಶ್ ಬಳ್ಳಾರಿ- ಆಕ್ಟೋಪಸ್, ಲಕ್ಷ್ಮೀ- ಪ್ರಕೃತಿ ಇಲ್ಲದಿದ್ದರೆ, ಆರ್.ಎಂ.ಪಾಟೀಲ್- ಸಿದ್ದ, ಪುಷ್ಪಲತಾ ಏಳುಬಾವಿ- ಆಧುನಿಕ ವಚನಗಳು, ಅಲಿನವಾಜ್-ಶಾಯರಿ, ಶಿವಪ್ರಸಾದ ಹಾದಿಮನಿ-ನಾವೆಂಥ ಜನ, ಎಂ.ಡಿ.ಹುಸೇನ್ - ಸ್ಪೋಟ, ರಂಗನಾಥ ಕೋಳೂರು- ಕರ್ನಾಟಕ ಮಾತೆ, ವೀರಣ್ಣ ರಡ್ಡೇರ- ಟಿ.ಎನ್.ಶೇಷನ್, ಸಾಧನೆಯ ಕೊರತೆ, ಮಾನಪ್ಪ ಬೆಲ್ಲದ- ಧರೆಯ ಸೇಡು, ಶಾಂತೇಶ ಬಡಿಗೇರ- ಗವಿಸಿದ್ದೇಶ್ವರ, ಆಧುನಿಕ ಮನು, ಅರುಣಾ ನರೇಂದ್ರ-ಸುರಿಸದಿರು ಗೆಳತಿ, ಸಿರಾಜ್ ಬಿಸರಳ್ಳಿ -ನಾವು ಬದುಕುವುದೇ ಹೀಗೆ - ಕವನಗಳನ್ನು ವಾಚನ ಮಾಡಿದರು.

ಕವನವಾಚನದ ನಂತರ ಹಿರಿಯ ಕವಿಯತ್ರಿ ಶ್ರೀಮತಿ ಶಾಂತಾದೇವಿ ಹಿರೇಮಠರ ಕವನ ಸಂಕಲನಗಳ ಬಗ್ಗೆ ಸಂವಾದ , ಚರ್ಚೆ, ವಿಮರ್ಶೆ ಹಮ್ಮಿಕೊಳ್ಳಲಾಗಿತ್ತು. ಕವನಗಳ ಬಗ್ಗೆ ಮಾತನಾಡಿದ ಶಿವಪ್ರಸಾದ ಹಾದಿಮನಿ ದಂಪತಿಗಳಿಬ್ಬರು ಸೇರಿ ಸೃಷ್ಟಿಸಿದ ಕವನ ಸಂಕಲನ ನೀನೇ ನಾನು ನಾನೇ ನೀನು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಹಾದಿಯನ್ನೇ ಸೃಷ್ಟಿಸಿತು ಎಂದರು. ಪುಷ್ಪಲತಾ ಏಳುಬಾವಿ, ಮಹೇಶ ಬಳ್ಳಾರಿ, ವಿರೇಶ ಹುಲ್ಲೂರ, ಶ್ರೀನಿವಾಸ ಚಿತ್ರಗಾರ, ಜಿ.ಎಸ್ ಬಾರಕೇರ,ರಂಗನಾಥ ಮತ್ತು ಮಹಾಂತೇಶ ಮಲ್ಲನಗೌಡರ , ವಿ.ಬಿ.ರಡ್ಡೇರ ಕೃತಿಗಳ ಕುರಿತು ಮಾತನಾಡಿದರು. ಬರೆಯುವ ಮಹಿಳೆಯೇ ಒಂದು ಕ್ರಾಂತಿ, ಹೆಣ್ಣಿನ ಶೋಷಣೆಯ ಬಗ್ಗೆ ಚೆನ್ನಾಗಿ ಬರೆದಿದ್ದಾರೆ ಎಂದು ವಿ.ಬಿ.ರಡ್ಡೇರ,ಮಹಾಂತೇಶ ಮಲ್ಲನಗೌಡರ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಕವಿಯತ್ರಿ ಶಾಂತಾದೇವಿ ಹಿರೇಮಠ ತಮ್ಮ ಕೃತಿ ಬಗ್ಗೆ ಮಾತನಾಡಿದ ಎಲ್ಲರಿಗೆ ಧನ್ಯವಾದ ಅರ್ಪಿಸಿದರು. ದಾಂಪತ್ಯ ಜೀವನದ ಕುರಿತ ಅವರ ಕವಿತೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

No comments:

Post a Comment