Monday, December 27, 2010

ಸಾಹಿತ್ಯ ಸಮಾಜದ ಪ್ರತಿಬಿಂಬ- ಜಯಸುತೆ



ಕೊಪ್ಪಳ: ಸಮಾಜದ ಸಮಸ್ಯೆಗಳನ್ನು ಬಿಂಬಿಸುವ ಕಥೆಗಳನ್ನು ಬರೆಯಬೇಕು, ಸಮಾಜವನ್ನು ಎಚ್ಚರಿಸುವ ಕೆಲಸ ಕತೆಗಳಲ್ಲಿ ನಡೆಯಬೇಕು. ಸಾಹಿತ್ಯ ಸಮಾಜದ ಪ್ರತಿಬಿಂಬದಂತೆ ಹಾಗಾಗಿ ಅದನ್ನು ಬಹಳ ಎಚ್ಚರಿಕೆಯಿಂದ , ಜವಾಬ್ದಾರಿಯಿಂದ ರಚಿಸಬೇಕು ಎಂದು ಜಯಸುತೆ ಕಾವ್ಯನಾಮದಿಂದ ಖ್ಯಾತರಾಗಿರುವ ಶ್ರೀಮತಿ ಸ್ನೇಹಲತಾ ಜೋಷಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಎನ್ ಜಿಓ ಭವನದಲ್ಲಿ ಹಮ್ಮಿಕೊಂಡಿದ್ದ ೩೫ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನಮ್ಮ ತಂದೆಯವರು ನನ್ನ ಮೇಲೆ ಬಹಳ ಪ್ರಭಾವಿ ಬೀರಿದ್ದು ಅವರೂ ಸಹ ಸಾಹಿತಿಗಳಾಗಿದ್ದರಿಂದ ಬಾಲ್ಯದಿಂದಲೇ ಸಾಹಿತ್ಯದತ್ತ ಸೆಳೆತ ಉಂಟಾಗಿತ್ತು. ನಂತರದ ದಿನಗಳಲ್ಲಿ ಕಥೆ,ಕಾದಂಬರಿ, ಕವನಗಳನ್ನು ಬರೆಯಲು ಅವರೇ ಸ್ಪೂರ್ತಿ ಎಂದು ಅವರು ಹೇಳಿದರು.
ಈ ಸಲದ ಕವಿಸಮಯದಲ್ಲಿ ಹೊಸ ಪ್ರಯೋಗ ಹಮ್ಮಿಕೊಳ್ಳಲಾಗಿತ್ತು. ಈ ಸಲ ಕಥಾವಾಚನ ನಡೆಸಲಾಯಿತು. ಸ್ವರಚಿತ ಕಥೆಗಳನ್ನು ಕತೆಗಾರರು ವಾಚನ ಮಾಡಿದರು. ನಂತರ ಅತಿಥಿಗಳು ಆ ಕತೆಗಳ ಬಗ್ಗೆ ಮಾತನಾಡಿದರು. ಕಥೆಗಳ ಕುರಿತ ಚರ್ಚೆ ನಡೆಯಿತು. ಮಹೇಶ ಬಳ್ಳಾರಿ- ರಘುಪತಿ ರಾಘವ ರಾಜಾರಾಮ, ಶಿವಪ್ರಸಾದ ಹಾದಿಮನಿ-ತ್ಯಾಗ, ಪುಷ್ಪಲತಾ ಏಳುಬಾವಿ- ಅದೃಷ್ಟದ ರಾಣಿ, ಅರುಣಾ ನರೇಂದ್ರ- ರಮ್ಯಾ - ರಮೇಶ ಕಥೆಗಳನ್ನು ವಾಚನ ಮಾಡಿದರು. ಸ್ನೇಹಲತಾ ಜೋಷಿಯವರೂ ತಮ್ಮ ಕಥೆ ನಿಗೂಢದ ಸಾರಾಂಶ ಹೇಳಿದರು.
ಕಾರ್‍ಯಕ್ರಮದಲ್ಲಿ ವೀರಣ್ಣ ಹುರಕಡ್ಲಿ, ಮಲ್ಲಿಕಾರ್ಜುನ ಎಚ್. ವಾಗೀಶ ಪಾಟೀಲ್, ಎನ್.ಜಡೆಯಪ್ಪ, ಶಿವಾನಂದ ಹೊದ್ಲೂರ, ಬಸವರಾಜ ಶೀಲವಂತರ, ಸುಮತಿ ಹಿರೇಮಠ, ಸುದೀಂದ್ರ,ಸಮೀರ್ ಜೋಷಿ ಹಾಗೂ ಇನ್ನಿತರರು ಭಾಗವಹಿಸಿದ್ದರು. ಸ್ವಾಗತವನ್ನು ಮಹೇಶ ಬಳ್ಳಾರಿ ಮಾಡಿದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

Monday, December 20, 2010

ಯಶಸ್ವಿ ಮುಕ್ತ ಕವಿಗೋಷ್ಠಿ :೩೪ನೇ ಕವಿಸಮಯ


ಕೊಪ್ಪಳ : ಸಮಾನ ಮನಸ್ಕ ಕವಿಸಮೂಹ , ಕನ್ನಡನೆಟ್.ಕಾಂ ನಗರದ ಎನ್‌ಜಿಓ ಭವನದಲ್ಲಿ ಹಮ್ಮಿಕೊಂಡಿದ್ದ ೩೪ನೇ ಕವಿ ಸಮಯ ಯಶಸ್ವಿಯಾಗಿ ಜರುಗಿತು. ಕವಿಗೋಷ್ಠಿಯಲ್ಲಿ ಮೊದಲು ಕವನ ವಾಚನ ಮಾಡಲಾಯಿತು. ನಂತರ ಅದರ ಬಗ್ಗೆ ಸಂವಾದ ನಡೆಯಿತು. ಕವಿಗೋಷ್ಠಿಯಲ್ಲಿ ವಾಗೀಶ್ ಪಾಟೀಲ್- ರೈತನ ಬಾಳು, ಎಸ್.ಎಂ.ಕಂಬಾಳಿಮಠ- ನನ್ನವಳು, ಎನ್.ಜಡೆಯಪ್ಪ- ಕಣ್ಣೀರು, ಬೆಳದಿಂಗಳು, ಹನುಮಂತಪ್ಪ ಅಂಡಗಿ- ವಿಪರ್‍ಯಾಸ, ಪುಷ್ಪಲತಾ ರಾಜಶೇಖರ ಏಳುಬಾವಿ- ಆದರ್ಶ ಸತಿ, ವಿಮಲಾ ಇನಾಂದಾರ್- ದಾಹರ ,ಸಂಗಾತಿ, ನಟರಾಜ ಸವಡಿ-ಆಸೆ, ಸಿರಾಜ್ ಬಿಸರಳ್ಳಿ-ಮಾರುತ್ತೇವೆ ನಾವು ಕವನಗಳನ್ನು ವಾಚನ ಮಾಡಿದರು.
ಕವನ ವಾಚನದ ನಂತರ ಅ ಮತ್ತಹ ಹ ಕಾರಗಳ ಉಚ್ಛಾರಣೆಯನ್ನು ತಪ್ಪು ತಪ್ಪಾಗಿ ಮಾಡಲಾಗುವ ಕುರಿತು ಮತ್ತು ಸ್ಪಷ್ಟ ಉಚ್ಛಾರಣೆ ಇರಬೇಕು, ಪ್ರಾದೇಶಿಕ ಭಿನ್ನತೆಯಿಂದ ಭಾಷೆಯಲ್ಲಿ ಹೆಚ್ಚು ಕಡಿಮೆ ಇದ್ದರೂ ಓದುವಾಗ ಸರಿಯಾಗಿ ಓದಬೇಕು ಎನ್ನುವ ಕುರಿತು ಚರ್ಚೆ ನಡೆಯಿತು.
ಕಾರ್‍ಯಕ್ರಮದಲ್ಲಿ ಮಲ್ಲಿಕಾರ್ಜುನ ಹೆಚ್.ವಿರೇಶ್, ತಿಪ್ಪೇಸ್ವಾಮಿ ಬೋದಾ, ಶಿವಾನಂದ ಹೊದ್ಲೂರ, ಭುಜಂಗಸ್ವಾಮಿ ಇನಾಂದಾರ್, ಆರ್.ಎಂ.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

Monday, December 13, 2010

ಅನುಭವ- ಅರಿವಿನೊಡನೆ ಸೇರಿದ ಕಾವ್ಯ ಸಕಾಲಿಕ ಹಾಗೂ ಸಾರ್ವಕಾಲಿಕ- ಬಿ.ಪೀರ್ ಬಾಷಾ




ಕೊಪ್ಪಳ : ಕಾವ್ಯ ಸರಳವಾಗಿದ್ದು ಮಹತ್ತರವಾದದ್ದನ್ನು ಕಾವ್ಯ ಹೇಳಬೇಕು ,ಅನುಭವ- ಅರಿವಿನೊಡನೆ ಸೇರಿದಾಗ ಮಾತ್ರ ಸಕಾಲಿಕವಾಗಿ ಸಾರ್ವಕಾಲಿಕವಾಗಿರುತ್ತದೆ ಎಂದು ಯುವ ಕವಿ ಬಿ.ಪೀರ್ ಬಾಷಾ ಹೇಳಿದರು. ಅವರು ನಗರದ ಎನ್‌ಜಿಒ ಭವನದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೩ನೇ ಕವಿಸಮಯದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪದ ಜೋಡಣೆಯೇ ಕಾವ್ಯವಲ್ಲ. ಪದವಿನ್ಯಾಸ ಕಾವ್ಯವಾಗಬಲ್ಲದು. ಅಂತರ್ಗತ ಲಯ, ಆಳದಲ್ಲಿ ತಾತ್ವಿಕತೆಯನ್ನು ಕಾವ್ಯ ಹೊಂದಬೇಕು. ಸ್ವಂತ ರಚನೆಗಳೊಂದಿಗೆ ವಿಮರ್ಶಾತ್ಮಕ ದೃಷ್ಟಿಯನ್ನಿಟ್ಟುಕೊಂಡಾಗ ಬೆಳೆಯಬಹುದು. ಸಕಾಲಿಕ,ದಕ್ಕಿದ ಅನುಭವಗಳನ್ನು ಬಳಸಿಕೊಂಡು ಬರೆಯಬೇಕು ಎಂದು ಹೇಳಿದರು. ಕಾವ್ಯದ ಬಗ್ಗೆ ನಡೆದಷ್ಟು ಚರ್ಚೆ ಬೇರೆಯಾವುದೇ ಸಾಹಿತ್ಯ ಪ್ರಕಾರದ ಬಗ್ಗೆ ನಡೆದಿಲ್ಲ.ಕವಿ ತನ್ನ ಸಮಾಜಿಕ ಜವಾಬ್ದಾರಿಗಳನ್ನು ಅರಿತು ಬರೆಯಬೇಕು ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಡಾ.ಮಹಾಂತೇಶ ಮಲ್ಲನಗೌಡರ- ರೂಪಾ ಕನ್ವರ್, ಶ್ರೀನಿವಾಸ ಚಿತ್ರಗಾರ- ಜಾದೂ, ಜಾನಪದ ಗೀತೆ, ಎನ್.ಜಡೆಯಪ್ಪ- ಧ್ವನಿ, ಮಗನ ಮಡದಿ, ರುಬಾಯಿಗಳು, ಪುಷ್ಪಾ ರಾಜಶೇಖರ ಏಳುಬಾವಿ- ಪರಿವರ್ತನೆ, ಪ್ರೀತಿ, ಬಸವರಾಜ ಸೂಳಿಬಾವಿ- ಆಯ್ದ ಕವನಗಳು, ಸುಮತಿ ಹಿರೇಮಠ- ಚರಿತ್ರೆಯಲ್ಲಿ ನಾವು, ಬೆನ್ನ ಹಿಂದಿನ ಹೆರಳು, ಸಿರಾಜ್ ಬಿಸರಳ್ಳಿ- ಬೆಂಕಿ ಹಚ್ಚಿ, ಮತ್ತೊಮ್ಮೆ ತೇರು ಎಳೆಯೋಣ ಕವನಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯಲ್ಲಿ ವೀರಣ್ಣ ವಾಲಿ, ವಿನಯ ಮದರಿ, ಎ.ಎಂ.ಮದರಿ, ಶಿವಪ್ರಸಾದ ಹಾದಿಮನಿ, ನಟರಾಜ ಸವಡಿ ಭಾಗವಹಿಸಿದ್ದರು. ಜಡೆಯಪ್ಪ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, December 6, 2010

ವಿಮರ್ಶೆಗಳನ್ನು ಸ್ವೀಕರಿಸುವ ಕವಿ ಬೆಳೆಯುತ್ತಾನೆ



ಕೊಪ್ಪಳ : ಕನ್ನಡನೆಟ್.ಕಾಂ ಕವಿಸಮೂಹ ತನ್ನ ೩೨ನೇ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿತ್ತು. ಈ ಸಲದ ಕವಿಸಮಯದಲ್ಲಿ ಮುಕ್ತ ಕವಿಗೋಷ್ಠಿ ಹಮ್ಮಿ ಕೊಳ್ಳಲಾಗಿತ್ತು.
ಕವಿಗೋಷ್ಠಿಯಲ್ಲಿ ನಟರಾಜ ಸವಡಿ- ಪ್ರೇಮೋತ್ಸವ,ಮುಂಜಾವು, ಮಲ್ಲಿಕಾರ್ಜುನ ಹಡಪದ- ಪ್ರೇಮ ಪತ್ರ, ಮಹಾಂತೇಶ ಮಲ್ಲನಗೌಡರ- ಈ ಲೋಕದಾಚೆ, ಜಡೆಯಪ್ಪ ಎನ್- ಚುಟುಕುಗಳು, ಎ.ಪಿ.ಅಂಗಡಿ- ಬಸ್ಸಿನಲ್ಲಿ ಹೆರಿಗೆ, ವಾಗೀಶ ಪಾಟೀಲ -ಅಳಲು, ಪುಷ್ಪಲತಾ ಏಳುಬಾವಿ- ಆಸೆ, ಮಹೇಶ ಬಳ್ಳಾರಿ-ಆಂಗ್ ಸಾನ್ ಸೂಕಿ, ಶಿವಪ್ರಸಾದ ಹಾದಿಮನಿ- ಬಸವಣ್ಣ, ಸಿರಾಜ್ ಬಿಸರಳ್ಳಿ - ಸಿದ್ದಾರ್ಥನ ಸ್ವಗತ ಕವನಗಳನ್ನು ವಾಚನ ಮಾಡಿದರು.
ಕಾವ್ಯ ವಾಚನದ ನಂತರ ಕವನಗಳ ವಿಮರ್ಶೆಯನ್ನು ಮಹಾಂತೇಶ ಮಲ್ಲನಗೌಡರ ಮತ್ತು ಎ.ಪಿ.ಅಂಗಡಿಯವರು ಮಾಡಿದರು. ನಂತರ ಕಾವ್ಯ ವಿಮರ್ಶೆಯ ಬಗ್ಗೆ ಚರ್ಚೆ ನಡೆಯಿತು. ಕವಿಗಳಿಗೆ ಮಹಾಂತೇಶ ಮಲ್ಲನಗೌಡರ ಮಾರ್ಗದರ್ಶನ ಮಾಡಿದರು. ಇತಿಹಾಸದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಹೈದ್ರಾಬಾದ್ ಕರ್ನಾಟಕದ ಸಾಹಿತಿಗಳು,ಸಾಹಿತ್ಯ ಮತ್ತು ಹೋರಾಟದ ಬಗ್ಗೆ ಚರ್ಚೆ ನಡೆತು,
ಹೈದ್ರಾಬಾದ್ ಕರ್ನಾಟಕದ ಸಾಹಿತಿಗಳ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸದ ಸಾಹಿತ್ಯ ಲೋಕಕ್ಕೆ ನಮ್ಮ ಯುವ ಪೀಳಿಗೆ ಸೂಕ್ತ ಉತ್ತರ ನೀಡುವಂತಾಗಬೇಕು. ಕರ್ನಾಟಕದ ಪ್ರತಿಯೊಬ್ಬರು ನಮ್ಮತ್ತ ತಿರುಗಿ ನೋಡುವಂತಹ ಸಾಹಿತ್ಯ ರಚನೆಯಾಗಬೇಕು. ದಾಸ ಸಾಹಿತ್ಯ, ಶರಣ ಸಾಹಿತ್ಯವನ್ನು ನೀಡಿದ ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಲೋಕದಲ್ಲಿ ಯಾವತ್ತೂ ನಿರ್ಲಕ್ಷ್ಯಕ್ಕೊಳಗಾಗಿದೆ. ಇಲ್ಲಿಯ ಸಾಹಿತಿಗಳ,ಸಾಹಿತ್ಯದ ಕುರಿತ ಗಂಭೀರ ಚಿಂತನೆ, ವಿಮರ್ಶೆ , ಅಧ್ಯಯನ ನಡೆದೇ ಇಲ್ಲ. ಗಟ್ಟಿ ಸಾಹಿತ್ಯ ನೀಡಿರುವ , ಹೋರಾಟದ ಭೂಮಿಯಾಗಿರುವ ಹೈದ್ರಾಬಾದ್ ಕರ್ನಾಟಕದ ಇತಿಹಾಸ, ಸಾಹಿತ್ಯ ಕುರಿತ ಗಂಭೀರ ಅಧ್ಯಯನ ನಡೆಯುವಂತಾಗಬೇಕು. ಹೊಸ ಸಂವೇದನೆಗಳ ಸ್ಟೃಯಾಗಬೇಕು, ಆದರ್ಶಗಳ ಹುಡುಕಾಟ ನಡೆಯಬೇಕು ಎಂದು ಚರ್ಚೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಕವಿಯಾದವನು ಮುಕ್ತವಾಗಿ ವಿಮರ್ಶೆಗಳಿಗೆ ತೆರೆದುಕೊಂಡಾಗ ಮಾತ್ರ ಬೆಳೆಯಲು ಸಾಧ್ಯ ಎಂದೂ ಅಭಿಪ್ರಾಯ ಪಡಲಾತು. ಚರ್ಚೆಯಲ್ಲಿ ಶಿವಪ್ರಸಾದ ಹಾದಿಮನಿ, ಸುಮತಿ ಹಿರೇಮಠ, ಸಿರಾಜ್ ಬಿಸರಳ್ಳಿ, ಮಹಾಂತೇಶ ಮಲ್ಲನಗೌಡರ, ಜಡೆಯಪ್ಪ, ಶಾಂತೇಶ,ಬಸವರಾಜ ಶೀಲವಂತರ ಭಾಗವಹಿಸಿದ್ದರು.
ಶಿವಾನಂದ ಹೊದ್ಲೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಹಾಂತೇಶ ಮಲ್ಲನಗೌಡರ ಸ್ವಾಗತ ಕೋರಿದರು,ಜಡೆಯಪ್ಪ ವಂದಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.