Tuesday, August 3, 2010

ಕವಿಸಮೂಹಕ್ಕೆ ಸ್ವಾಗತ

ಕವಿಸಮೂಹದ ಈ ಬ್ಲಾಗ್ ಗೆ ತಮ್ಮೆಲ್ಲರಿಗೂ ಸುಸ್ವಾಗತ. ಕವಿಸಮೂಹ ಕೊಪ್ಪಳದ ಸಮಾನ ಮನಸ್ಕ ಸಾಹಿತ್ಯ ಆಸಕ್ತರಿಂದ ರೂಪಿತಗೊಂಡಿರುವ ಒಂದು ಸಮೂಹ. ಕವಿಸಮೂಹದಿಂದ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಮೊದಲಿಗೆ ಕವಿಸಮಯ ಎನ್ನುವ ಪ್ರತಿವಾರದ ಕವಿಗೋಷ್ಠಿಯನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕವಿಸಮಯ ಪ್ರತಿರವಿವಾರ ಸಾಯಂಕಾಲ 4.30ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿದೆ. ಈ ಕವಿಸಮಯದಲ್ಲಿ ಕವಿಗಳು ತಮ್ಮ ಕವಿತೆಗಳನ್ನು/ಗಜಲ್ /ಶಾಯಿರಿ ಗಳನ್ನು ವಾಚನ ಮಾಡುತ್ತಾರೆ. ಅಂದಿನ ದಿನದ ವಿಶೇಷ ಅತಿಥಿಗಳು ಆಯಾ ಕವನದ ವಿಮರ್ಶೆ ಮತ್ತು ಕವಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ.
ಪ್ರತಿವಾರ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ವಿವಿದೆಡೆಯೆಂದ ಕವಿಗಳು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಕವಿಗೋಷ್ಠಿಯ ನಂತರ ಜಿಲ್ಲೆಯ ಸಾಹಿತಿಗಳ ಕೃತಿಗಳ ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿವಾರ ಒಬ್ಬ ಕವಿಯ ಕವನಸಂಕಲನದ ಬಗ್ಗೆ ಚರ್ಚೆ ,ಸಂವಾದ ಮತ್ತು ವಿಮರ್ಶೆ ನಡೆಯುತ್ತದೆ.
ಕನ್ನಡ ಸಾಹಿತ್ಯದ ಬಗ್ಗೆ ಆರೋಗ್ಯ ಪೂರ್ಣ ಚರ್ಚೆ ನಡೆಯಲಿ, ಉತ್ತಮ ಸಾಹಿತ್ಯ ರಚನೆಯಾಗಲಿ, ಕಿರಿಯರಿಗೆ ಹಿರಿಯರಿಂದ ಮಾರ್ಗದರ್ಶನ ಸಿಗಲಿ, ಕೊಪ್ಪಳದ ಕವಿಗಳು ,ಸಾಹಿತಿಗಳು ಹೆಚ್ಚಿನದನ್ನು ಸಾಧಿಸಲಿ ಇದಕ್ಕೆ ಕವಿಸಮೂಹ ದಿಂದ ಸಾಧ್ಯವಾಗುವ ಎಲ್ಲ ಪ್ರೇರಣೆ ,ಮಾರ್ಗದರ್ಶನ ನೀಡಬೇಕು ಎನ್ನುವದು ಕವಿಸಮೂಹದ ಆಶಯ
ಮುಂದಿನ ದಿನಗಳಲ್ಲಿ ಕವಿಸಮೂಹದಿಂದ ಪುಸ್ತಕ ಪ್ರಕಟಣೆ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ.
-
-ಸಿರಾಜ್ ಬಿಸರಳ್ಳಿ

No comments:

Post a Comment