Tuesday, August 17, 2010

ಒಳ್ಳೆಯ ಮನುಷ್ಯನನ್ನು ಸೃಷ್ಟಿಸುವ ಸಾಹಿತ್ಯ ಬೇಕು -ಬಸವರಾಜ್ ಸೂಳಿಬಾವಿ



ಕೊಪ್ಪಳ : ಒಳ್ಳೆಯ ಸಾಹಿತ್ಯ ಸೃಷ್ಟಿಗಿಂತ ಒಳ್ಳೆಯ ಮನುಷ್ಯರನ್ನು ಸೃಷ್ಟಿಸುವ ಸಾಹಿತ್ಯ ಶ್ರೇಷ್ಠವಾದದ್ದು. ಕವಿ,ಲೇಖಕನಾದವನು ನಮ್ಮ ನಡುವಿನ ತಲ್ಲಣಗಳಿಗೆ ಸ್ಪಂದಿಸುವ ಮನಸ್ಸು ಹೊಂದಿರಬೇಕು. ಕೇವಲ ಬಹುಪರಾಕು ಹೇಳುವವನು ಕವಿಯಾಗಲಾರ ಎಂದು ಖ್ಯಾತ ಹೋರಾಟಗಾರ ಹಾಗೂ ಲೇಖಕ ಬಸವರಾಜ ಸೂಳಿಬಾವಿ ಹೇಳಿದರು. ಅವರಿಂದು ಕನ್ನಡನೆಟ್.ಕಾಂ ಕವಿಸಮೂಹ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೧೬ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು ಪ್ರಸ್ತುತೆಗೆ ಸ್ಪಂದಿಸದೇ ಕೇವಲ ಅಲಂಕಾರಿವಾಗಿ ಬರೆಯುತ್ತಾ ಹೋಗುವುದು ಸಾಹಿತ್ಯವಲ್ಲ, ತಲ್ಲಣಗಳಿಗೆ ಸ್ಪಂದಿಸಿ ಒಳ್ಳೆಯತನಕ್ಕಾಗಿ ಮಿಡಿಯುವುದು ಮನುಷ್ಯತ್ವ ಇದೇ ಕವಿಯ ಮನಸ್ಸು ಎಂದರು. ಈಗ ಎಲ್ಲೆಡೆ ದ್ವೇಷ ಹಂಚುವ ಕೆಲಸ ನಡೆಯುತ್ತಿದೆ ಇದನ್ನು ಮೀರಿ ನಿಲ್ಲಬೇಕು , ಒಳ್ಳೆಯ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಕವಿಸಮೂಹ ಒಳ್ಳೆಯ ವೇದಿಕೆಯಾಗಿದೆ. ವಿಮರ್ಶೆ ಎನ್ನುವುದು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿರುವಂತದ್ದು ಆದ್ದರಿಂದ ಮುಕ್ತವಾಗಿ ವಿಮರ್ಶೆ ನಡೆಯಬೇಕು ಎಂದರು. ಸ್ವಾತಂತ್ರೋತ್ಸವದ ನಿಮಿತ್ತ ಕವಿಸಮೂಹ ಕಾರ್‍ಯಕ್ರಮವನ್ನು ಮಧ್ಯಾಹ್ನ ೩ ಕ್ಕೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ೧೫ ಕವಿಗಳು ತಮ್ಮ ಕವನ ವಾಚನ ಮಾಡಿದರು. ಕನ್ನಡನೆಟ್.ಕಾಂ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್‍ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಕೊಪ್ಪಳ ಜಿಲ್ಲೆಯ ಖ್ಯಾತ ಕವಿ ಡಾ.ಮಹಾಂತೇಶ ಮಲ್ಲನಗೌಡರಿಗೆ ಅಕಾಡೆಮಿ ಆಪ್ ಬೆಂಗಾಲಿ ಪೋಯಟ್ರಿ, ಕಲ್ಕತ್ತಾ ಇವರು ಆಚಾರ್‍ಯ ಪ್ರಫುಲ್ಲಾ ಚಂದ್ರರಾಯ್ ಸ್ಮಾರಕ ಸಮ್ಮಾನ -೨೦೧೦ ಪ್ರಶಸ್ತಿಯನ್ನು ನೀಡಿದೆ. ಇದಕ್ಕಾಗಿ ಕವಿಸಮೂಹದ ಎಲ್ಲ ಕವಿಗಳು ಮಹಾಂತೇಶ ಮಲ್ಲನಗೌಡರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಕವಿಗೋಷ್ಠಿಯಲ್ಲಿ ವಾಚಿಸಿದ ಕವನಗಳು : ಬಸವರಾಜ ಮಾರನಬಸರಿ ಗಜೇಂದ್ರಗಡ- ಬನ್ನಿ ಭಾರತೀಯರೇ, ಬಸವರಾಜ ಸೂಳಿಬಾವಿ- ಎರಡು ಕವಿತೆಗಳು, ಮಹೇಶ ಬಳ್ಳಾರಿ- ಬದುಕು, ಪುಷ್ಪಲತಾ ಏಳುಬಾವಿ- ಏನೆಂದು ಬರೆಯಲಿ, ಮಹಾಂತೇಶ ಮಲ್ಲನಗೌಡರ- ಹೆಣ್ಣಿನ ಸ್ವಗತ, ಸಿರಾಜ್ ಬಿಸರಳ್ಳಿ - ಗಾಡಬಣ್ಣಗಳು, ಶಿವಪ್ರಸಾದ ಹಾದಿಮನಿ- ಬುದ್ದಿಜೀವಿಗಳೇ ಹೀಗೆ, ಶಿ.ಕಾ.ಬಡಿಗೇರ- ಬೆಳಕು ನೋಡದವರು, ಹನುಮಂತಪ್ಪ ಬಾರಕೇರ- ಹಕ್ಕಿ, ಎನ್.ಜಡೆಯಪ್ಪ- ಆಧುನಿಕ ವಚನ, ಆಲಿ ನವಾಜ್ : ನಾನೊಬ್ಬ ಬಾಲಕಾರ್ಮಿಕ, ವೀರಣ್ಣ ಹುರಕಡ್ಲಿ- ಅತ್ತೆ ಮನೆಗೆ ಅಳಿಯ ಬಂದಾಗ, ಎ.ಪಿ.ಅಂಗಡಿ- ಬಸ್ಸಿನಲ್ಲಿ ಹೆರಿಗೆ ಕವನಗಳನ್ನು ವಾಚಿಸಿದರು. ಜಡೆಯಪ್ಪ ಕಾರ್‍ಯಕ್ರಮ ನಡೆಸಿಕೊಟ್ಟರು. ಶಿ.ಕಾ.ಬಡಿಗೇರ ಸ್ವಾಗತಿಸಿದರು. ಸಿರಾಜ್ ಬಿಸರಳ್ಳಿ ವಂದನಾರ್ಪಣೆ ಮಾಡಿದರು

1 comment:

  1. kavisamaya blog chennagide, koppaladanth uralli inthaddondu prayatna nijakku olleyadu. kavya preeti heccisutturuva ellarigu abhinandanegalu.

    -Dr. arun jolad kudligi
    joladarun@gmail.com
    9901445702

    ReplyDelete