Monday, November 1, 2010

ಕೋಮುವಾದವನ್ನು ಹತ್ತಿಕ್ಕಲು ಸಾಹಿತಿಗಳು ಮನುಷ್ಯ ಪ್ರೇಮ ಬೆಳೆಸಬೇಕು- ಮಕಾನದಾರ


ಕೊಪ್ಪಳ : ಜೀವನವನ್ನೇ ನರಕ ಮಾಡುತ್ತಿರುವ ,ಮನುಷ್ಯ ಮನುಷ್ಯರ ನಡುವೆ ಕಂದಕ ನಿರ್ಮಿಸಿ ಕೋಮುಸೌಹಾರ್ಧಕ್ಕೆ ದಕ್ಕೆ ತಂದು ಮಾರಣಹೋಮ ಮಾಡುತ್ತಿರುವವರಲ್ಲಿ ಮನುಷ್ಯ ಪ್ರೇಮ ಬೆಳೆಸಬೇಕು. ಇದು ಸಾಹಿತ್ಯದಿಂದ, ಕಾವ್ಯದಿಂದ ಸಾಧ್ಯ, ಸಾಹಿತಿಗಳು ಮನುಷ್ಯ ಪ್ರೇಮ ಬೆಳೆಸಬೇಕು ಎಂದು ಬಂಡಾಯ ಸಾಹಿತಿ ಗದಗಿನ ಎ.ಎಸ್.ಮಕಾನದಾರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೭ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸೂಫಿ ಸಂತರು ನಡೆದಾಡಿದಂತಹ ಸ್ಥಳಗಳಲ್ಲಿ ಕೋಮುವಾದದ ಬೀಜ ಬಿತ್ತಿ ಕೋಮು ಗಲಭೆ ನಡೆಸಲಾಗುತ್ತಿದೆ. ಜಾತಿ,ಜನಾಂಗ.ಭಾಷೆಯ ಎಲ್ಲ ಕಟ್ಟು ಪಾಡುಗಳನ್ನು ಮೀರಿ ಮನುಷ್ಯತ್ವದೆಡೆಗೆ, ಸೌಹರ್ಧತೆಯೆಡೆಗೆ,ಸಾಮರಸ್ಯದೆಡೆಗೆ ಸಾಗಿದ ಸೂಫಿ ಸಂತರ ವಿಚಾರಗಳ ಪ್ರಚಾರವಾಗಬೇಕು. ಇದರಿಂದ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯ ಎಂದರು.

ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ವಾಗೀಶ ಪಾಟೀಲ-ಕ್ರಾಂತಿ, ಬಸಪ್ಪ ಬಾರಕೇರ-ಆಧುನೀಕ ವಚನಗಳು, ಮಹಾಂತೇಶ ಮಲ್ಲನಗೌಡರ-ಕನ್ನಡ ಜ್ಯೋತಿ, ಮಹೇಶ ಬಳ್ಳಾರಿ-ಕಟ್ಟುತ್ತೇವೆ, ಶಿವಪ್ರಸಾದ ಹಾದಿಮನಿ-ಚುಟುಕು, ಎ.ಪಿ.ಅಂಗಡಿ-ಶಿಶುಗೀತೆ, ಜಡೆಯಪ್ಪ- ಗಲ್ಲ, ಹಂದಿಗಳು, ಎ.ಎಸ್.ಮಕಾನದಾರ - ಅಣ್ಣಪ್ಪನಿಗೊಂದು ಮನವಿ, ಸಿರಾಜ್ ಬಿಸರಳ್ಳಿ-ಕನ್ನಡತಿ, ಬಿ.ಎಸ್.ಪಾಟೀಲ್-ಮಧ್ಯಮರು, ಗೋವಿಂದರಾಜ್ ಸಿದ್ದಾಂತಿ -ದೇಶಭಕ್ತಿಗೀತೆ, ಶಾಂತಾದೇವಿ ಹಿರೇಮಠ- ರಾಜ್ಯೋತ್ಸವ ನಾಡಹಬ್ಬ,ಮಹೆಬೂಬ ಮಕಾನದಾರ- ಹನಿಗವನ, ವಿಠ್ಠಪ್ಪ ಗೋರಂಟ್ಲಿ- ಚುಟುಕುಗಳ ವಾಚನ ಮಾಡಿದರು. ಕವಿಗೋಷ್ಠಿಯ ನಂತರ ಎ.ಎಸ್.ಮಕಾನದಾರರ ಸಾಹಿತ್ಯ ಕುರಿತ ಸಂವಾದ ನಡೆಯಿತು. ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಎ.ಎಸ್.ಮಕಾನದಾರರ ವಿಶ್ವ ಭ್ರಾತೃತ್ವದ ಸೂಫಿ ದೂದಪೀರಾಂ ಕೃತಿಯ ಬಗ್ಗೆ ಮಾತನಾಡಿ ಸೂಪಿ ಸಂತರ ವಿಚಾರಗಳನ್ನು ತಿಳಿಸಿದರು. ಶಿವಪ್ರಸಾದ ಹಾದಿಮನಿ- ಎದೆ ಸುಡುವ ನೆನಪುಗಳು ಕವನ ಸಂಕಲನದ ಬಗ್ಗೆ, ಎ.ಪಿ.ಅಂಗಡಿ-ಮನುಷ್ಯ ಪ್ರೇಮ ಕದ ತೆರೆಯುವ ಹೊತ್ತಿಗೆ ಕುರಿತು ಮಾತನಾಡಿದರು., ಜಡೆಯಪ್ಪ ನಾವೇ ಅಲ್ಲವೇ ಕವನವನ್ನು ಉಲ್ಲೇಖಿಸಿ ಮಾತನಾಡಿದರು. ಎ.ಎಸ್.ಮಕಾನದಾರ ಕೊಪ್ಪಳ ಜಿಲ್ಲೆಯ ಸಾಹಿತಿಗಳು ತಮ್ಮ ಮೇಲೆ ಬೀರಿದ ಪ್ರಭಾವದ ಬಗ್ಗೆ ಮಾತನಾಡಿದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

No comments:

Post a Comment