ಕೊಪ್ಪಳ : ಎಲ್ಲರೂ ಹೇಳಿದ ಮಾತುಗಳನ್ನೇ ಹೇಳುವುದರಲ್ಲಿ ಅರ್ಥವಿಲ್ಲ. ಹಿರಿಯ ಕವಿಗಳ ಮಾರ್ಗದರ್ಶನ ಯುವಕವಿಗಳಿಗೆ ಅವಶ್ಯಕ ಮತ್ತು ಅವರು ಹೇಳಿದ ಮಾತುಗಳನ್ನು ಕಾವ್ಯ ರಚನೆಯಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಗಟ್ಟಿ ಕಾವ್ಯ ಸಾಧ್ಯ ಎಂದು ಯುವ ಕವಿ ಶಿವಪ್ರಸಾದ ಹಾದಿಮನಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ಕವಿಸಮಯ 28ನೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಸಮಾನ ಮನಸ್ಕರ ಬೆರೆಯುವ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದ ಅವರು ಮುಕ್ತವಾಗಿ ಕವನಗಳ ವಿಮರ್ಶೆಮಾಡಿ ನಾನು ಮಾಡುತ್ತಿರುವುದು ವಿಮರ್ಶೆ ಅಲ್ಲ ಅವಲೋಕನ ಎಂದು ಹೇಳಿ ಸರಳವಾಗಿ ಕವನಗಳ ಕುರಿತು ಮಾತನಾಡಿದರು. ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ 20 ಕವಿಗಳು ತಮ್ಮ ಕವನ ವಾಚನ ಮಾಡಿದರು.
ಎ.ಪಿ.ಅಂಗಡಿ- ಪಟಾಕಿ, ಡಾ.ಮಹಾಂತೇಶ ಮಲ್ಲನಗೌಡರ- ಹಾಡು ಬಾರೆಲೆ ಕೋಗಿಲೆ, ಪುಷ್ಪಲತಾ ಏಳುಬಾವಿ- ಪಾಪದ ಹೂಗಳು, ಸುಮತಿ- ಪ್ರೀತಿಗೆ ಶ್ರದ್ದಾಂಜಲಿ, ಭಾವಬಿಂಬ,ಶಾಂತಾದೇವಿ ಹಿರೇಮಠ-ಚುಟುಕುಗಳು, ಲಕ್ಷ್ಮೀ ನಾಯಕ್-ಪ್ರೀತಿ, ಶಿ.ಕಾ.ಬಡಿಗೇರ-ಸಹಬಾಳ್ಬೆ,ಜಡೆಯಪ್ಪ-ದೀಪಾವಳಿ, ನೀ ಬದುಕಬಲ್ಲೆ, ವಿಠ್ಠಪ್ಪ ಗೋರಂಟ್ಲಿ- ಬರಾಕೋಗ್ಬೆಡಮಾ, ಎಸ್.ಎಂ.ಕಂಬಾಳಿಮಠ-ಇದ್ರ ಹೇಳ್ರಿ, ನಟರಾಜ ಸವಡಿ- ನೆರೆಹಾವಳಿ, ಸಿರಾಜ್ ಬಿಸರಳ್ಳಿ- ಸಿಕ್ಕುಗಳು, ಪ್ರೋ.ಅಲ್ಲಮಪ್ರಭು ಬೆಟ್ಟದೂರು-ಕವಿತೆ ಚುಟುಕುಗಳು,ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್- ಕವಿತೆ, ಡಾ.ಮಾರ್ಕಂಡಯ್ಯ ಹಂದ್ರಾಳ -ಚುಟುಕು, ಭರತೇಶ್ -ಯಾರಿವಳು, ಶಿವಾನಂದ ಹೊದ್ಲೂರ-ಕನ್ನಡಾಂಭೆ, ತುಳಸಿಪ್ರಿಯ- ನೀರಜೆ ಚುಟುಕು, ತಿಪ್ಪೇಸ್ವಾಮಿ ಭೋದಾ- ಕಾಯಕ ದಾಸೋಹ, ವಾಗೀಶ ಪಾಟೀಲ್-ನೆನಪುಗಳು ಕವನಗಳನ್ನು ವಾಚನ ಮಾಡಿದರು. ಮಹಾಂತೇಶ ಮಲ್ಲನಗೌಡರ ಶಿವಪ್ರಸಾದ ಹಾದಿಮನಿ ಕುರಿತು ಮಾತನಾಡಿದರು. ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.
No comments:
Post a Comment