Wednesday, November 17, 2010

ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಕವನಗಳು ರಚನೆಯಾಗಲಿ




ಕೊಪ್ಪಳ : ಕವಿತೆ ಎನ್ನುವುದು ಒಳಾರ್ಥದೊಂದಿಗೆ ಮೂಡಿಬಂದಾಗ ಒಳ್ಳೆಯ ಪರಿಣಾಮ ಬೀರುತ್ತದೆ. ಕವಿತೆ ಗಧ್ಯದಷ್ಟು ಸುಲಭವಲ್ಲ . ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಕವನಗಳು , ಸಾರ್‍ವಕಾಲಿಕ ಕವನಗಳ ರಚನೆಯಾಗಬೇಕು ಎಂದು ಯುವ ಬರಹಗಾರ ಬಸವರಾಜ ಮೂಲಿಮನಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೯ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಜಡೆಯಪ್ಪ ಎನ್- ಕನಸು ಕಂಡಿದ್ದೀಯಾ ನೀನು?, ಶಿ.ಕಾ.ಬಡಿಗೇರ- ಬಾಲ್ಯದ ಬಣ್ಣದೊಳಗೆ ಮಿಂದು, ವಿಮಲಾ ಇನಾಂದಾರ್- ನಾಡಗೀತೆ, ಶಾಂತಾದೇವಿ ಹಿರೇಮಠ- ಬಣ್ಣದ ಕಾರಂಜಿ, ಪುಷ್ಪಲತಾ ಏಳುಬಾವಿ- ಪಾರಿವಾಳ, ಶಿವಾನಂದ ಹೊದ್ಲೂರ- ಅಬುರವರ ಕವನ, ಡಾ.ಮಹಾಂತೇಶ ಮಲ್ಲನಗೌಡರ- ಕಾಮನಬಿಲ್ಲು, ಅಲ್ಲಮಪ್ರಭು ಬೆಟ್ಟದೂರ- ಮಹಾಸ್ವಾಮಿಗಳು ಬರುತ್ತಿದ್ದಾರೆ ಎಚ್ಚರಿಕೆ, ವಾಸುದೇವ ಕುಲಕರ್ಣಿ- ಬಸ್ಸಿನಲ್ಲಿ ಹಿಂದುಳಿದವರು, ಸಿರಾಜ್ ಬಿಸರಳ್ಳಿ- ಚುಟುಕು, ಶಾಯಿರಿಗಳು, ಎ.ಪಿ.ಅಂಗಡಿ- ಸೊಳ್ಳೆಗಳು ಸಾರ್ ಸೊಳ್ಳೆಗಳು, ಶಾಂತೇಶ ಬಡಿಗೇರ-ಹೃದಯ ಮಿಡಿತ, ಅರುಣಾ ನರೇಂದ್ರ- ಕೊಡೆ ಚುಟುಕು, ವಿಠ್ಠಪ್ಪ ಗೋರಂಟ್ಲಿ, ಕನಸು ಬಿತ್ತಿ ಕಣ್ಮರೆಯಾದ ವಿಭಾ, ವೀರಣ್ಣ ಹುರಕಡ್ಲಿ- ಮಾತು, ಕನಕಪ್ಪ ತಳವಾರ- ಚೆನ್ನವೀರ ಕಣವಿ, ಎಸ್.ಎಂ.ಕಂಬಾಳಿಮಠ- ಅಸ್ತು, ಅಮ್ಮಾ-ಅಪ್ಪ, ತಿಪ್ಪೆಸ್ವಾಮಿ ಬೋಧಾ- ಅಕ್ಕಮಹಾದೇವಿ, ಜಿ.ಎಸ್.ಬಾರಕೇರ- ಚಾಚಾ ನೆಹರು ಕವನಗಳನ್ನು ವಾಚನ ಮಾಡಿದರು.
ಮುಂದಿನ ವಾರ ಶ್ರೀಮತಿ ವಿಮಲಾ ಇನಾಂದಾರ್ ರ ಕಾವ್ಯ ಕುರಿತು ವಿಮರ್ಶೆ ಹಾಗೂ ಚರ್ಚೆ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜಶೇಖರ ಅಂಗಡಿ,ಭುಜಂಗಸ್ವಾಮಿ ಹಿರೇಮಠ ,ಮಾನಪ್ಪ ಬೆಲ್ಲದ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ವಿಠ್ಠಪ್ಪ ಗೋರಂಟ್ಲಿಯವರು ವಂದಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

No comments:

Post a Comment