Monday, October 25, 2010

ಹಳೆಯ ಪರಂಪರೆಯ ಕಾವ್ಯವನ್ನು ಯುವಕವಿಗಳು ಓದಬೇಕು- ವೀರಣ್ಣ ವಾಲಿ


ಕೊಪ್ಪಳ : ಕಾವ್ಯ ಸಾಂಸ್ಕೃತಿಕ ಮಡಿಲನ್ನು ಕಟ್ಟುತ್ತದೆ. ಕಾವ್ಯಂ ರಸಾತ್ಮಕ ವಾಕ್ಯಂ ಎನ್ನುವಂತೆ ಕಾವ್ಯದಲ್ಲಿ ರಸಬೇಕು. ಜೀವನದ ಅಭಿವ್ಯಕ್ತಿಯೇ ಕಾವ್ಯ. ನಮ್ಮ ಸಧ್ಯದ ಸಾಮಾಜಿಕ ಅವ್ಯವಸ್ಥೆಯನ್ನು ಎದುರಿಸುವುದಕ್ಕೆ ಕಾವ್ಯ ಪ್ರಭಾವಶಾಲಿ ಮಾಧ್ಯಮ,ಸಾಹಿತ್ಯ ಯಾವತ್ತೂ ನಿಂತ ನೀರಲ್ಲ ಅದು ನಿರಂತರ ಚಲನಶೀಲತ್ವ ಹೊಂದಿದೆ. ನಮ್ಮ ಕಾವ್ಯ ಪರಂಪರೆಯು ಶ್ರೀಮಂತವಾದುದು. ಯುವಕವಿಗಳು ಹೆಚ್ಚಿನ ಅಧ್ಯಯನ ಮಾಡಬೇಕು. ಹಳೆಯ ಪರಂಪರೆಯ ಕಾವ್ಯವನ್ನು ಓದುವದರ ಮೂಲಕ ತಮ್ಮ ಕಾವ್ಯವನ್ನು ಗಟ್ಟಿಗೊಳಿಸಿಕೊಳ್ಳುವತ್ತ ಸಾಗಬೇಕು ಎಂದು ಬಂಡಾಯ ಕವಿ ವೀರಣ್ಣ ವಾಲಿ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೬ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅನ್ಯಭಾಷಾ ಸಾಹಿತ್ಯವನ್ನು ಓದುವುದರಿಂದ ಬೆಳವಣಿಗೆ ಸಾಧ್ಯ,ನಿರಂತರ ಅಧ್ಯಯನ ಶೀಲತೆಯಿಂದ ಸಮೃದ್ದ, ಗಟ್ಟಿಯಾದ ಕಾವ್ಯ ರಚನೆ ಸಾಧ್ಯ ಅದರತ್ತ ಯುವ ಕವಿಗಳು ಗಮನ ಹರಿಸಬೇಕು ಎಂದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎನ್.ಜಡಿಯಪ್ಪ- ಒಳಬರಬೇಡ ಹೊರಗೆ ನಿಲ್ಲು, ಶಿವಪ್ರಸಾದ ಹಾದಿಮನಿ-ಹಗರಣಗಳು ಎಷ್ಟು ಬಲ್ಲಿರಾ?, ಶಾಂತಪ್ಪ ಬಡಿಗೇರ-ಭೂದೇವಿ, ಎಂ.ಎಸ್.ಕಂಬಾಳಿಮಠ-ಭುವಿಯ ಬಾನು,ಶಿ.ಕಾ.ಬಡಿಗೇರ-ನಮನ,ವಾಗೀಶ ಪಾಟೀಲ್- ಆ ದಿನಗಳು, ಮಲ್ಲಿಕಾರ್‍ಜುನ - ಅರ್ಥ, ಶ್ರೀಮತಿ ಅರುಣಾ ನರೇಂದ್ರ- ಆಧುನಿಕ ವಚನಗಳು ಕವನಗಳನ್ನು ವಾಚನ ಮಾಡಿದರು. ವೀರಣ್ಣ ಹುರಕಡ್ಲಿ, ತಿಪ್ಪೇಸ್ವಾಮಿ ಭೋದಾ, ಗಿರೀಶ ಹೊನ್ನಾಳು ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತವನ್ನು ಎನ್.ಜಡೆಯಪ್ಪ ,ವಂದನಾರ್ಪಣೆ- ಎಸ್.ಎಂ.ಕಂಬಾಳಿಮಠ ಮಾಡಿದರು. ಶಿ.ಕಾ.ಬಡಿಗೇರ ಕಾರ್‍ಯಕ್ರಮ ನಿರೂಪಿಸಿದರು.

No comments:

Post a Comment