Monday, January 10, 2011

ಹಿಂದಿನ ನಾಟಕಕಾರರ ಸಾಹಿತ್ಯ ಎಂದೆಂದಿಗೂ ಸ್ಮರಣೀಯ: ವೀರಣ್ಣ ಹುರಕಡ್ಲಿ



ಕೊಪ್ಪಳ : ಹಳೆಯ ನಾಟಕಗಳಲ್ಲಿ ಬರುತ್ತಿದ್ದ ಸಾಹಿತ್ಯ ಎಂದೆಂದಿಗೂ ಸ್ಮರಣೀಯವಾದದ್ದು. ಆ ನಾಟಕಗಳನ್ನು ಈಗಲೂ ಜನ ಮೆಲುಕು ಹಾಕುವಂತಹ ಪರಿಸ್ಥಿತಿ ಇದೆ ಎಂದು ಕವಿ ವೀರಣ್ಣ ಹುರಕಡ್ಲಿ ಹೇಳಿದರು. ಅವರು ನಗರದ ಎನ್‌ಜಿಓ ಭವನದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೭ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವಾಚನ ಮಾಡಿದ ಕವನಗಳ ಕುರಿತು ಮಾತನಾಡಿ ಅವರು ತಮ್ಮ ನಾಟಕದ ದಿನಗಳನ್ನು ನೆನಪಿಸಿ ಕಂದಗಲ್ ಹನುಮಂತರಾಯ, ಪಿ.ಬಿದುತ್ತರಗಿ, ಹೆಚ್.ಎನ್.ಹೂಗಾರ್ ರನ್ನು ನೆನಪಿಸಿಕೊಂಡು ಅವರ ನಾಟಕಗಳ ಕುರಿತು ಮಾತನಾಡಿದರು. ನಾಟಕದ ಅನುಭವಗಳನ್ನು ಮೆಲಕು ಹಾಕಿದ ಅವರು ತಮ್ಮ ಸಾಹಿತ್ಯಕ್ಕೆ ಪ್ರೇರಣೆ ನೀಡಿದವರನ್ನು ಸ್ಮರಿಸಿದರು.
ಕವಿಸಮಯದಲ್ಲಿ ಮುಕ್ತ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಕವಿಗೋಷ್ಠಿಯಲ್ಲಿ ಎಸ್.ಎಂ.ಕಂಬಾಳಿಮಠ-೨ಜಿ ಸ್ಪೆಕ್ಟ್ರಂ, ರಮೇಶ ಬನ್ನಿಕೊಪ್ಪ- ಭಾನುಮತಿಯ ನಿಟ್ಟುಸಿರು, ತಿಪ್ಪೆಸ್ವಾಮಿ ಬೋದಾ- ೨೦೧೦, ಶಾಂತಪ್ಪ ಬಡಿಗೇರ- ಭಾರತಾಂಭೆ, ಎ.ಪಿ.ಅಂಗಡಿ-ನದಿಗಳಮ್ಮ ನದಿಗಳು, ವೀರಣ್ಣ ಹುರಕಡ್ಲಿ- ಭೂಪತಿಯ ಭೂಪರು , ಪುಷ್ಪಲತಾ ಏಳುಭಾವಿ-ರೈತ, ಸುಮತಿ ಹಿರೇಮಠ- ನಿನ್ನ ಪ್ರೀತಿ, ಶಿವಪ್ರಸಾದ ಹಾದಿಮನಿ- ಬುದ್ದಿಜೀವಿಗಳೇ ಇವರು, ವಾಗೀಶ ಪಾಟೀಲ- ಪ್ರೀತಿಯ ಜಲ, ಸಿರಾಜ್ ಬಿಸರಳ್ಳಿ- ಜ್ವಾಲಾಮುಖಿ ಕಣ್ಣೀರು, ಮಲ್ಲಿಕಾರ್ಜುನ ಹೆಚ್.ಯಲಬುರ್‍ಗಾ- ನನ್ನ ಪ್ರೀತಿ, ಮೆಹಮೂದ ಮಿಯಾ- ಆಳ ಆತ್ಮ, ಅಲ್ಲಮಪ್ರಭು ಬೆಟ್ಟದೂರ- ದೆಹಲಿ ಒಂದಷ್ಟು ನೋಡು ಕವನಗಳನ್ನು ವಾಚನ ಮಾಡಿದರು.
ಇತ್ತೀಚೆಗೆ ತಮ್ಮ ಒಡಲದನಿ ಕವನಸಂಕಲನ ಬಿಡುಗಡೆಗೊಳಿಸಿದ ವೀರಣ್ಣ ಹುರಕಡ್ಲಿಯವರಿಗೆ ಕವಿಸಮೂಹವು ಅಭಿನಂದನೆಗಳನ್ನು ಸಲ್ಲಿಸಿ ಅವರ ಸಾಹಿತ್ಯ ಸೇವೆ ನಿರಂತರವಾಗಿರಲಿ ಎಂದು ಹಾರೈಸಿದರು.
ಶಿವಪ್ರಸಾದ ಹಾದಿಮನಿ ವಂದಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

No comments:

Post a Comment