Monday, January 3, 2011

ಸ್ವವಿಮರ್ಶೆಯಿಂದ ಕವಿ ಬೆಳೆಯುತ್ತಾನೆ - ಸೂರ್ಯಕಾಂತ ಗುಣಕಿಮಠ





ಕೊಪ್ಪಳ : ಉತ್ತಮ ಬರವಣಿಗೆಯ ತುಡಿತದಿಂದ ಕಾವ್ಯ ಸರ್ವಕಾಲಕ್ಕೂ ನಿಲ್ಲುತ್ತದೆ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುತ್ತಾ ಸಾಗಿದಾಗ ಉತ್ತಮ ಕಾವ್ಯ ರಚನೆ ಸಾಧ್ಯ ಎಂದು ಹಿರಿಯ ಕವಿ ಸೂರ್‍ಯಕಾಂತ ಗುಣಕಿಮಠ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೬ನೇ ಕವಿಸಮಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನಮ್ಮ ಕವಿತೆಗಳನ್ನು ನಾವೇ ಮೆಲುಕು ಹಾಕಬೇಕು ಹಾಗಾದಾಗ ಉತ್ತಮ ರಚನೆ ಸಾಧ್ಯವಿದೆ.ಉತ್ತಮ ಬರಹಗಳ ಪುಸ್ತಕಕ್ಕೆ ಹಿಂಬದಿ ಪುಟದ ಅವಶ್ಯಕತೆ ಇಲ್ಲ.
ತಮ್ಮ ಅನುವಾದಿತ ರುಬಾಯಿಗಳನ್ನು, ಕವನಗಳನ್ನು ವಾಚನ ಮಾಡಿದ ಗುಣಕಿಮಠರು, ಕವಿಸಮಯದಲ್ಲಿ ವಾಚನ ಮಾಡಲಾದ ಕತೆಗಳ ಕುರಿತು , ಕವನಗಳ ಕುರಿತು ಮಾತನಾಡಿದರು. ಕೊಪ್ಪಳದಲ್ಲಿ ತಾವು ಕಳೆದ ದಿನಗಳನ್ನು ನೆನಪು ಮಾಡಿಕೊಂಡು ಕನ್ನಡನೆಟ್.ಕಾಂ ಕವಿಸಮೂಹದ ಪ್ರಯತ್ನವನ್ನು ಶ್ಲಾಘಿಸಿದ ಅವರು ಈ ಕೆಲಸ ನಿರಂತರವಾಗಿರಲಿ ಎಂದು ಹಾರೈಸಿದರು.
ಇದಕ್ಕೂ ಮೊದಲು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿಯವರ ಕಥಾವಾಚನ ಹಮ್ಮಿಕೊಳ್ಳಲಾಗಿತ್ತು. ವಿಠ್ಠಪ್ಪ ಗೋರಂಟ್ಲಿಯವರ "ಸಾವು" ಕತೆಯನ್ನು ಎನ್.ಜಡೆಯಪ್ಪ ವಾಚನ ಮಾಡಿದರು. ನಂತರ ಸಿರಾಜ್ ಬಿಸರಳ್ಳಿ " ಗರಿಕೆ ಮೇಲಿನ ಮಂಜು ಹನಿ" ಕತೆಯನ್ನು ವಾಚನ ಮಾಡಿದರು.
ನಂತರ ಹಮ್ಮಿಕೊಳ್ಳಲಾಗಿದ್ದ ಕವಿಗೋಷ್ಠಿಯಲ್ಲಿ ನಟರಾಜ ಸವಡಿ- ಆಹ್ವಾನ, ಗಾಯಿತ್ರಿ ಭಾವಿಕಟ್ಟಿ- ಬಿಸ್ಲೇರಿ ಬಾಟಲುಗಳು, ಮಲ್ಲಿಕಾರ್ಜುನ ಹೆಚ್. ಯಲಬುರ್ಗಾ-ಬಾಟಲಿ ಚುಟುಕು, ವಾಗೀಶ ಪಾಟೀಲ- ಶೀರ್ಷಿಕೆಯಿಲ್ಲದ ಕವಿತೆ, ಶಿವಪ್ರಸಾದ ಹಾದಿಮನಿ- ಬಸವಣ್ಣ, ಜಡೆಯಪ್ಪ- ಮುತ್ತು, ಚುಟುಕು, ಅಲ್ಲಮಪ್ರಭು ಬೆಟ್ಟದೂರ- ವಿಜಯನಗರ ವೈಭವ ಸೃಷ್ಟಿಸುತ್ತಿರುವವರಿಗೆ, ಮಹೇಶ ಬಳ್ಳಾರಿ- ಬಿಂಬ, ಎಸ್.ಎಂ.ಕಂಬಾಳಿಮಠ- ವಂದನೆ ಅಭಿನಂದನೆ, ಪುಷ್ಪಲತಾ ಏಳುಬಾವಿ- ಬಡತನದ ರಾಗ, ಜಿ.ಎಸ್.ಬಾರಕೇರ- ಮೌನ ಮಡಿಲಿನ ಇಟಗಿ, ಜಯಸುತೆ- ನನ್ನಾಕೆ ಮುನಿದಾಗ, ಡಾ.ರೇಣುಕಾ ಕರಿಗಾರ-ಕಂಪು ಬೀರದ ಹೂ,ಡಾ.ವಿ.ಬಿ.ರಡ್ಡೇರ- ಒರತೆಗಳು, ಚುನಾವಣೆ ಕವನಗಳನ್ನು ವಾಚನ ಮಾಡಿದರು.
ಸೂರ್ಯಕಾಂತ ಗುಣಕಿಮಠರ ಕುರಿತು ಪ್ರೋ.ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ ಹಳೆಯ ದಿನಗಳನ್ನು ನೆನಪಿಸಿಕೊಂಡು ಕನ್ನಡದಲ್ಲಿ ವಿಜ್ಞಾನದ ಮರುಸೃಷ್ಟಿ ಕಾರ್‍ಯ ಸೂರ್ಯಕಾಂತ ಗುಣಕಿಮಠರಿಂದ ನಡೆಯಲಿ ಎಂದರು.
ಕಾರ್‍ಯಕ್ರಮದಲ್ಲಿ ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ, ಪ್ರಿಯಾಂಕ ಪತ್ರಿಕೆಯ ಟಿ.ಟಿ.ಕಸ್ತೂರಿ, ಬಸವರಾಜ ಶೀಲವಂತರ,ಎಸ್.ಎಲ್.ಪಾಟೀಲ್, ಸುದೀಂದ್ರ, ವೀರಣ್ಣ ಹುರಕಡ್ಲಿ, ಶಿವಾನಂದ ಹೊದ್ಲೂರ ಮುಂತಾದವರು ಭಾಗವಹಿಸಿದ್ದರು. ಮಹಾಂತೇಶ ಮಲ್ಲನಗೌಡರ ಸ್ವಾಗತ ಕೋರಿದರು. ಎಸ್.ಎಂ.ಕಂಬಾಳಿಮಠ - ವಂದನಾರ್ಪಣೆ ಮಾಡಿದರು. ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.

No comments:

Post a Comment