Monday, December 6, 2010

ವಿಮರ್ಶೆಗಳನ್ನು ಸ್ವೀಕರಿಸುವ ಕವಿ ಬೆಳೆಯುತ್ತಾನೆ



ಕೊಪ್ಪಳ : ಕನ್ನಡನೆಟ್.ಕಾಂ ಕವಿಸಮೂಹ ತನ್ನ ೩೨ನೇ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿತ್ತು. ಈ ಸಲದ ಕವಿಸಮಯದಲ್ಲಿ ಮುಕ್ತ ಕವಿಗೋಷ್ಠಿ ಹಮ್ಮಿ ಕೊಳ್ಳಲಾಗಿತ್ತು.
ಕವಿಗೋಷ್ಠಿಯಲ್ಲಿ ನಟರಾಜ ಸವಡಿ- ಪ್ರೇಮೋತ್ಸವ,ಮುಂಜಾವು, ಮಲ್ಲಿಕಾರ್ಜುನ ಹಡಪದ- ಪ್ರೇಮ ಪತ್ರ, ಮಹಾಂತೇಶ ಮಲ್ಲನಗೌಡರ- ಈ ಲೋಕದಾಚೆ, ಜಡೆಯಪ್ಪ ಎನ್- ಚುಟುಕುಗಳು, ಎ.ಪಿ.ಅಂಗಡಿ- ಬಸ್ಸಿನಲ್ಲಿ ಹೆರಿಗೆ, ವಾಗೀಶ ಪಾಟೀಲ -ಅಳಲು, ಪುಷ್ಪಲತಾ ಏಳುಬಾವಿ- ಆಸೆ, ಮಹೇಶ ಬಳ್ಳಾರಿ-ಆಂಗ್ ಸಾನ್ ಸೂಕಿ, ಶಿವಪ್ರಸಾದ ಹಾದಿಮನಿ- ಬಸವಣ್ಣ, ಸಿರಾಜ್ ಬಿಸರಳ್ಳಿ - ಸಿದ್ದಾರ್ಥನ ಸ್ವಗತ ಕವನಗಳನ್ನು ವಾಚನ ಮಾಡಿದರು.
ಕಾವ್ಯ ವಾಚನದ ನಂತರ ಕವನಗಳ ವಿಮರ್ಶೆಯನ್ನು ಮಹಾಂತೇಶ ಮಲ್ಲನಗೌಡರ ಮತ್ತು ಎ.ಪಿ.ಅಂಗಡಿಯವರು ಮಾಡಿದರು. ನಂತರ ಕಾವ್ಯ ವಿಮರ್ಶೆಯ ಬಗ್ಗೆ ಚರ್ಚೆ ನಡೆಯಿತು. ಕವಿಗಳಿಗೆ ಮಹಾಂತೇಶ ಮಲ್ಲನಗೌಡರ ಮಾರ್ಗದರ್ಶನ ಮಾಡಿದರು. ಇತಿಹಾಸದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಹೈದ್ರಾಬಾದ್ ಕರ್ನಾಟಕದ ಸಾಹಿತಿಗಳು,ಸಾಹಿತ್ಯ ಮತ್ತು ಹೋರಾಟದ ಬಗ್ಗೆ ಚರ್ಚೆ ನಡೆತು,
ಹೈದ್ರಾಬಾದ್ ಕರ್ನಾಟಕದ ಸಾಹಿತಿಗಳ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸದ ಸಾಹಿತ್ಯ ಲೋಕಕ್ಕೆ ನಮ್ಮ ಯುವ ಪೀಳಿಗೆ ಸೂಕ್ತ ಉತ್ತರ ನೀಡುವಂತಾಗಬೇಕು. ಕರ್ನಾಟಕದ ಪ್ರತಿಯೊಬ್ಬರು ನಮ್ಮತ್ತ ತಿರುಗಿ ನೋಡುವಂತಹ ಸಾಹಿತ್ಯ ರಚನೆಯಾಗಬೇಕು. ದಾಸ ಸಾಹಿತ್ಯ, ಶರಣ ಸಾಹಿತ್ಯವನ್ನು ನೀಡಿದ ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಲೋಕದಲ್ಲಿ ಯಾವತ್ತೂ ನಿರ್ಲಕ್ಷ್ಯಕ್ಕೊಳಗಾಗಿದೆ. ಇಲ್ಲಿಯ ಸಾಹಿತಿಗಳ,ಸಾಹಿತ್ಯದ ಕುರಿತ ಗಂಭೀರ ಚಿಂತನೆ, ವಿಮರ್ಶೆ , ಅಧ್ಯಯನ ನಡೆದೇ ಇಲ್ಲ. ಗಟ್ಟಿ ಸಾಹಿತ್ಯ ನೀಡಿರುವ , ಹೋರಾಟದ ಭೂಮಿಯಾಗಿರುವ ಹೈದ್ರಾಬಾದ್ ಕರ್ನಾಟಕದ ಇತಿಹಾಸ, ಸಾಹಿತ್ಯ ಕುರಿತ ಗಂಭೀರ ಅಧ್ಯಯನ ನಡೆಯುವಂತಾಗಬೇಕು. ಹೊಸ ಸಂವೇದನೆಗಳ ಸ್ಟೃಯಾಗಬೇಕು, ಆದರ್ಶಗಳ ಹುಡುಕಾಟ ನಡೆಯಬೇಕು ಎಂದು ಚರ್ಚೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಕವಿಯಾದವನು ಮುಕ್ತವಾಗಿ ವಿಮರ್ಶೆಗಳಿಗೆ ತೆರೆದುಕೊಂಡಾಗ ಮಾತ್ರ ಬೆಳೆಯಲು ಸಾಧ್ಯ ಎಂದೂ ಅಭಿಪ್ರಾಯ ಪಡಲಾತು. ಚರ್ಚೆಯಲ್ಲಿ ಶಿವಪ್ರಸಾದ ಹಾದಿಮನಿ, ಸುಮತಿ ಹಿರೇಮಠ, ಸಿರಾಜ್ ಬಿಸರಳ್ಳಿ, ಮಹಾಂತೇಶ ಮಲ್ಲನಗೌಡರ, ಜಡೆಯಪ್ಪ, ಶಾಂತೇಶ,ಬಸವರಾಜ ಶೀಲವಂತರ ಭಾಗವಹಿಸಿದ್ದರು.
ಶಿವಾನಂದ ಹೊದ್ಲೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಹಾಂತೇಶ ಮಲ್ಲನಗೌಡರ ಸ್ವಾಗತ ಕೋರಿದರು,ಜಡೆಯಪ್ಪ ವಂದಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

No comments:

Post a Comment