Monday, December 20, 2010

ಯಶಸ್ವಿ ಮುಕ್ತ ಕವಿಗೋಷ್ಠಿ :೩೪ನೇ ಕವಿಸಮಯ


ಕೊಪ್ಪಳ : ಸಮಾನ ಮನಸ್ಕ ಕವಿಸಮೂಹ , ಕನ್ನಡನೆಟ್.ಕಾಂ ನಗರದ ಎನ್‌ಜಿಓ ಭವನದಲ್ಲಿ ಹಮ್ಮಿಕೊಂಡಿದ್ದ ೩೪ನೇ ಕವಿ ಸಮಯ ಯಶಸ್ವಿಯಾಗಿ ಜರುಗಿತು. ಕವಿಗೋಷ್ಠಿಯಲ್ಲಿ ಮೊದಲು ಕವನ ವಾಚನ ಮಾಡಲಾಯಿತು. ನಂತರ ಅದರ ಬಗ್ಗೆ ಸಂವಾದ ನಡೆಯಿತು. ಕವಿಗೋಷ್ಠಿಯಲ್ಲಿ ವಾಗೀಶ್ ಪಾಟೀಲ್- ರೈತನ ಬಾಳು, ಎಸ್.ಎಂ.ಕಂಬಾಳಿಮಠ- ನನ್ನವಳು, ಎನ್.ಜಡೆಯಪ್ಪ- ಕಣ್ಣೀರು, ಬೆಳದಿಂಗಳು, ಹನುಮಂತಪ್ಪ ಅಂಡಗಿ- ವಿಪರ್‍ಯಾಸ, ಪುಷ್ಪಲತಾ ರಾಜಶೇಖರ ಏಳುಬಾವಿ- ಆದರ್ಶ ಸತಿ, ವಿಮಲಾ ಇನಾಂದಾರ್- ದಾಹರ ,ಸಂಗಾತಿ, ನಟರಾಜ ಸವಡಿ-ಆಸೆ, ಸಿರಾಜ್ ಬಿಸರಳ್ಳಿ-ಮಾರುತ್ತೇವೆ ನಾವು ಕವನಗಳನ್ನು ವಾಚನ ಮಾಡಿದರು.
ಕವನ ವಾಚನದ ನಂತರ ಅ ಮತ್ತಹ ಹ ಕಾರಗಳ ಉಚ್ಛಾರಣೆಯನ್ನು ತಪ್ಪು ತಪ್ಪಾಗಿ ಮಾಡಲಾಗುವ ಕುರಿತು ಮತ್ತು ಸ್ಪಷ್ಟ ಉಚ್ಛಾರಣೆ ಇರಬೇಕು, ಪ್ರಾದೇಶಿಕ ಭಿನ್ನತೆಯಿಂದ ಭಾಷೆಯಲ್ಲಿ ಹೆಚ್ಚು ಕಡಿಮೆ ಇದ್ದರೂ ಓದುವಾಗ ಸರಿಯಾಗಿ ಓದಬೇಕು ಎನ್ನುವ ಕುರಿತು ಚರ್ಚೆ ನಡೆಯಿತು.
ಕಾರ್‍ಯಕ್ರಮದಲ್ಲಿ ಮಲ್ಲಿಕಾರ್ಜುನ ಹೆಚ್.ವಿರೇಶ್, ತಿಪ್ಪೇಸ್ವಾಮಿ ಬೋದಾ, ಶಿವಾನಂದ ಹೊದ್ಲೂರ, ಭುಜಂಗಸ್ವಾಮಿ ಇನಾಂದಾರ್, ಆರ್.ಎಂ.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

No comments:

Post a Comment