Monday, September 27, 2010

ಕವಿತೆಯಲ್ಲಿ ಬರೀ ವರ್ಣನೆ ಅಲ್ಲ ಧ್ವನಿಯೂ ಇರಬೇಕು- ಎಚ್.ಎಸ್.ಪಾಟೀಲ್



ಕಾವ್ಯ ಎಲ್ಲಕಾಲದಲ್ಲೂ ತನ್ನ ಉಷ್ಣತೆಯನ್ನು ಕಾಪಾಡಿಕೊಂಡು ಬಂದಾಗ ಸಾರ್ವಕಾಲಿಕವಾಗುತ್ತದೆ. ಕವಿತೆ ಎನ್ನುವುದು ಬರಿಯ ವರ್ಣನೆ ಅಲ್ಲ ಅದರಲ್ಲಿ ಧ್ವನಿ ಇರುತ್ತದೆ. ಅರ್ಥಪೂರ್ಣ ಸಾಲುಗಳನ್ನು ಕವನದಲ್ಲಿ ಬಳಸಬೇಕು.ಪದಗಳಿಗೆ, ಶಬ್ದಗಳಿಗೆ ಕಾವ್ಯಾತ್ಮಕ ಸ್ಪರ್ಶ ಇರಬೇಕು ಎಂದು ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೨ನೇ ಕವಿಸಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಸಂದರ್ಭದಲ್ಲಿ ಕಾವ್ಯ ಯಾವ ಸ್ತರದಲ್ಲಿ ಎನ್ನುವದನ್ನು ಗಮನಿಸಬೇಕು, ವಿವಿಧ ಕವಿಗಳ ಕವನಗಳನ್ನು, ವಿವಿಧ ಸಾಪ್ತಾಹಿಕ,ವಾರಪತ್ರಿಕೆಗಳನ್ನು ಓದಬೇಕು ಎಂದರು. ನಾವು ರಚಿಸಿದ ಕವನಗಳು ಪ್ರಸ್ತುತ ಸಂದರ್ಭದ ಕವನಗಳ ಜೊತೆ ಸ್ಪರ್ಧಿಸಬೇಕು, ನಿಲ್ಲುವಂತಾಗಬೇಕು. ಇದಕ್ಕಾಗಿ ಸತತ ಅಧ್ಯಯನದಲ್ಲಿ ತೊಡಗಬೇಕು. ಹೊಸ ಪ್ರಯೋಗಗಳಿಗೆ ಒಳಗಾಗಬೇಕು ಎಂದರು.
ಇದಕ್ಕೂ ಮೊದಲು ನಡೆದ ಕವನವಾಚನದಲ್ಲಿ ೨೦ ಕವಿಗಳು ತಮ್ಮ ಕವನ ವಾಚನ ಮಾಡಿದರು. ಅಲಿ ನವಾಜ್ -ನಾಡಿನ ಸಂಸ್ಕೃತಿ, ವಾಗೀಶ ಪಾಟೀಲ್- ನನ್ನೂರು, ಶಾಂತಾದೇವಿ ಹಿರೇಮಠ- ತಿರುವು, ಲಕ್ಷ್ಮೀ- ಕತ್ತಲು, ಶಾಂತು ಬಡಿಗೇರ-ದೃವತಾರೆ,ಶಿವಪ್ರಸಾದ ಹಾದಿಮನಿ-ಕಟ್ಟೋಣ, ಹಾಲಪ್ಪ, ವಾಲ್ಮಿಕಿ ಎಕರನಾಳ- ಪುಣ್ಯಕೋಟಿ ಗುರುರಾಜ, ಡಾ.ಮಹಾಂತೇಶ ಮಲ್ಲನಗೌಡರ- ಹಾರಾಡಿ ಶಾಂತಿ ದೂತರೆ, ಎಸ್. ಕಂಬಾಳಿಮಠ- ಯೋಗಿ ಪುಂಗವ ಮರಿಶಾಂತವೀರ,ಡಾ.ವಿ.ಬಿ.ರಡ್ಡೇರ್-ಅಂದು ಗದುಗಿನಲಿ, ಶಿ.ಕಾ.ಬಡಿಗೇರ- ಹಾಯ್ಕುಗಳು, ಎನ್.ಜಡೆಯಪ್ಪ- ಗುರು ಪುಟ್ಟರಾಜ, ವಾಸುದೇವ ಕುಲಕರ್ಣಿ- ಜ್ಞಾನಜ್ಯೋತಿ, ವೀರಣ್ಣ ವಾಲಿ-ಕಪ್ಪು ಗೆಳೆಯನ ಕುರಿತು, ಸಿರಾಜ್ ಬಿಸರಳ್ಳಿ- ಕ್ರಾಂತಿ ಸೂರ್‍ಯನ ಕಂದೀಲು, ಪುಷ್ಪಾ ಏಳುಬಾವಿ-ಯಾರು ನೀನು? , ಮೌನೇಶ- ಮಿನುಗು, ನಾಗರಾಜ್ ಬೆಣಕಲ್- ಸ್ನೇಹ ಕವನಗಳನ್ನು ವಾಚನಮಾಡಿದರು.
ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ, ಹುಸೇನಪಾಷಾ, ಕರಿಸಿದ್ದನಗೌಡ, ಮಲ್ಲಿಕಾರ್ಜುನ, ಹನುಮಂತಪ್ಪ ಅಂಡಗಿ, ಈಶ್ವರ ಹತ್ತಿ ಇನ್ನಿತರರು ಉಪಸ್ಥಿತರಿದ್ದರು. ಶಿ.ಕಾ.ಬಡಿಗೇರ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

No comments:

Post a Comment