Tuesday, September 7, 2010

ಸತತ ಅಧ್ಯಯನವೇ ಗಟ್ಟಿ ಕವಿತೆಗೆ ಕಾರಣ -ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್




ಕವಿಗಳು ಸತತ ಅಧ್ಯಯನಶೀಲರಾಗಬೇಕು, ಹಿರಿಯ ಕವಿಗಳ ಕವನಗಳನ್ನು ಓದುವುದರ ಮೂಲಕ ಹೆಚ್ಚಿನ ಜ್ಞಾನವನ್ನು ಪಡೆಯಬಹುದು. ಇದರಿಂದ ನಮ್ಮ ರಚನೆಗಳು ಇನ್ನೂ ಗಟ್ಟಿಗೊಳ್ಳುತ್ತಾ ಸಾಗುತ್ತವೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಬಯಸುವ ಕವಿತೆ ಶಕ್ತಿಯುತವಾದಾಗ ಅದು ಎಲ್ಲರನ್ನೂ ತಲುಪುತ್ತದೆ ಎಂದ ಸಂಶೋದಕ ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್ ಹೇಳಿದರು. ಅವರು ನಗರ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೧೯ನೇ ಕವಿಸಮಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಠೋರ ಸತ್ಯಗಳನ್ನು ಹೇಳುವ ಶಕ್ತಿ ಮತ್ತು ಮನಸ್ಸಿನ ಕತ್ತಲನ್ನು ಹೊಡೆದೊಡಿಸುವ ಶಕ್ತಿ ಸಾಹಿತ್ಯಕ್ಕಿದೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಲವೂ ಕವಿಸಮಯದಲ್ಲಿ ಅಶುಕವಿತೆ ರಚನೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಾಗರಾಜ ಬೆಲ್ಲದ-ಗೆಳತಿ, ಜಿ.ಎಸ್.ಬಾರಕೇರ- ಪುಸ್ತಕ, ಎನ್.ಜಡೆಯಪ್ಪ-ನಾಯಿ,ಗುರು, ಶಾಂತಾದೇವಿ ಹಿರೇಮಠ- ಶಿಕ್ಷಕ, ವಾಗೀಶ ಪಾಟೀಲ -ಸಾಹಿತ್ಯ, ಮಹಾಂತೇಶ ಮಲ್ಲನಗೌಡರ- ಬೆತ್ತಲೆಯವರ ನಾಡಿನಲ್ಲಿ, ವಿಠ್ಠಪ್ಪ ಗೋರಂಟ್ಲಿ- ರಸ್ತೆಗಳು, ಗುರು, ಎ.ಪಿ.ಅಂಗಡಿ- ಚುಟುಕು, ಶಿ.ಕಾ.ಬಡಿಗೇರ- ಗುರು ಶಿಷ್ಯ, ಸಿರಾಜ್ ಬಿಸರಳ್ಳಿ- ಗುರು, ವೀರಣ್ಣ ಹುರಕಡ್ಲಿ- ಅಕ್ಷರ, ಸಿದ್ದಲಿಂಗಪ್ಪ ಕೊಟ್ನೇಕಲ್- ಕಾಲ, ಸತ್ಯ ಮತ್ತು ದೈವ, ಪುಷ್ಪಲತಾ ಏಳುಬಾವಿ- ಸಾಲುಮರದ ತಿಮ್ಮಕ್ಕ ,ಚುಟುಕುಗಳನ್ನು ವಾಚಿಸಿದರು.
ಕವಿಗೋಷ್ಠಿಯ ನಂತರ ಎ.ಪಿ.ಅಂಗಡಿಯವರ ಮಗ್ಗಿಮಾಮನ ಹಾಡುಗಳು ಕುರಿತು ಸಂವಾದ ಏರ್ಪಡಿಸಲಾಗಿತ್ತು. ಸಂವಾದದಲ್ಲಿ ಶಿವಪ್ರಸಾದ ಹಾದಿಮನಿ, ಪುಷ್ಪಲತಾ ಏಳುಬಾವಿ, ಎನ್.ಜಡೆಯಪ್ಪ ಮತ್ತಿತರರು ಭಾಗವಹಿಸಿ ಮಾತನಾಡಿದರು. ಸಂವಾದಕ್ಕೆ ಪ್ರತಿಯಾಗಿ ಮಾತನಾಡಿದ ಕವಿ ಎ.ಪಿ.ಅಂಗಡಿ ವಿಮರ್ಶೆ ಮಾಡಿದ ಎಲ್ಲರಿಗು ಧನ್ಯವಾದ ಅರ್ಪಿಸಿ, ಸಲಹೆ ಸೂಚನೆಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳುವುದಾಗಿ ಹೇಳಿದರು. ಶಿ.ಕಾ.ಬಡಿಗೇರ ಸ್ವಾಗತಿಸಿದರು, ಕಾರ್‍ಯಕ್ರಮವನ್ನು ಕವಿಸಮೂಹದ ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

No comments:

Post a Comment